ಓದಬೇಕೆಂದು ಕೊಂಡುಕೊಂಡ ಪುಸ್ತಕದ ರಾಶಿ ನನ್ನ ಕಪಾಟಿನಲ್ಲಿ ತುಂಬುತ್ತಾ ಇದೆ : ಆದರೆ ಓದಲು ಆಗುತ್ತಿಲ್ಲ. ಓದಲು ಆಗದ ಕಾರಣ ಪುಸ್ತಕ ಖರೀದಿಯೇನೂ ನಿಂತಿಲ್ಲ. ಇವತ್ತು ಮಂಗಳೂರಿಗೆ ಹೋಗಿ , ಚೇತನ್ ಭಗಥರ ತ್ರೀ ಮಿಸ್ಟೇಕ್ಸ್ ಆಫ್ ಮೈ ಲೈಫ್ ಫಿಕ್ಷನ್ ಆಧಾರಿತ ಕೈಪೋಚೆ ಸಿನೇಮಾ ನೋಡುವ ಮೊದಲಿದ್ದ ಕೊಂಚ ಬಿಡುವಿನಲ್ಲಿ ಎರಡು ಪುಸ್ತಕ ಖರೀದಿಸಿದೆ- ಗುರುಪ್ರಸಾದ್ ಡೈರೆಕ್ಟರ್ ಸ್ಪೆಷಲ್ ಅವರ ಸಿನೆಮ ಮಾಡಲಾಗದ ಕತೆಗಳು ಮತ್ತಿತರ ಲೇಖನ ಮತ್ತು ದಿನ ನಿತ್ಯದ ಕಾನೂನಿಗೆ ಸಂಭಂಧಿಸಿದ ಮತ್ತೊಂದು ಪುಸ್ತಕ.ಪುಸ್ತಕ ಓದುವುದು ನನ್ನ ಅಚ್ಚು ಮೆಚ್ಚಿನ ಹವ್ಯಾಸಗಳಲ್ಲಿ ಒಂದು.ಯಾವುದೇ ಜಾತ್ರೆ, ಕಾರ್ಯಕ್ರಮಗಳಿರಲಿ ಅಲ್ಲಿರುವ ಪುಸ್ತಕದಂಗಡಿಗೆ ಭೇಟಿ ನೀಡದೆ ನನ್ನ ಮನಸ್ಸಿಗೆ ಸಮಾಧಾನವಿಲ್ಲ.ಈಗ ಸಧ್ಯಕ್ಕೆ ನಾನು ಮಂಗಳೂರಿನ ಬಳಿಯ ಬಿ. ಸಿ ರೋಡಿನಲ್ಲಿ ವಾಸಿಸುತ್ತಿದ್ದೇನೆ. ಇಲ್ಲಿಗೆ ಬರುವ ಮೊದಲು ನಾನು ಒಂದು ವರ್ಷದ ಮಟ್ಟಿಗೆ ಮಂಗಳೂರಿನಲ್ಲೇ ವಾಸವಾಗಿದ್ದೆ.ನನ್ನ ಆಫೀಸ್ಗೆ ಬರುವ ಹಾದಿಯಲ್ಲಿ ಅತ್ರಿ ಪುಸ್ತಕ ಭಂಡಾರ ಇತ್ತು. ಆ ಹಾದಿಯಲ್ಲಿ ಹೋಗುವಾಗ ಕಣ್ಣನ್ನೊಮ್ಮೆ ಪುಸ್ತಕಗಳ ಮೇಳಾಡಿಸದೆ ಹೋಗುವುದು ನನ್ನಿಂದ ಆಗದೆ ಇರುವ ಮಾತಾಗಿತ್ತು.ಮತ್ತೆ ಮಂಗಳೂರಿನಲ್ಲಿ ಸ್ವಪ್ನ ಬುಕ್ ಹೌಸ್ ಪ್ರಾರಂಭವಾಯಿತು . ಅತ್ರಿ ಪುಸ್ತಕ ಭಂಡಾರ ಮುಚ್ಚಿತು ಮತ್ತು ಅದೇ ಸ್ಥಳದಲ್ಲಿ ನವ ಕರ್ನಾಟಕರವರ ಪುಸ್ತಕದ ಮಳಿಗೆ ತೆರೆಯಿತು.ಈ ಮೂರು ಮಳಿಗೆಗಳಿಂದ ನಾನು ಸಾಕಷ್ಟು ಪುಸ್ತಕಗಳನ್ನು ಖರಿದಿಸಿದ್ದೇನೆ. ಈಗ ಹೆಚ್ಚಾಗಿ ನಾನು ಪುಸ್ತಕಗಳನ್ನು ಖರೀದಿಸುವುದು ಸ್ವಪ್ನ ಬುಕ್ ಹೌಸಿನಿಂದ: ಕಾರಣ ಅಲ್ಲಿರುವ ಆಯ್ಕೆಗಳು.
ನನ್ನ ಸಮಾಜದ ಬಗೆಗಿನ ವಿಷಯವನ್ನು ಒಳಗೊಂಡ 'ಸ್ವಪ್ನ ಸಾರಸ್ವತ' ಕಾದಂಬರಿಯನ್ನು ಅರ್ದಕ್ಕಿಂತ ಹೆಚ್ಚು ಓದಲಾಗಲಿಲ್ಲ. ಒಂದೇ ಗುಂಗಿನಲ್ಲಿ ಓದಿ ಮುಗಿಸದ ಹೊರತು ಯಾವುದೇ ಪುಸ್ತಕ ನಮ್ಮನ್ನು ನಾಟುವುದಿಲ್ಲ ಮತ್ತು ಈ ಕಾದಂಬರಿ ವಿಶಾಲವಾಗಿರುವುದರಿಂದ ಅದರ ಓದು ನನಗಿನ್ನೂ ಕೂಡಿ ಬಂದಿಲ್ಲ. ಮೊನ್ನೆ ನಮ್ಮ ಕುಲದೇವರಾದ 'ರಾಮನಾಥ್' ಪೊಂಡ , ಗೋವಾ ದೇವಸ್ಥಾನಕ್ಕೆ ಭೇಟಿ ನೀಡಿದಾಗ , ಆ ದೇವಸ್ತಾನದ 450 ನೆ ಮಹೋತ್ಸವ ನೆನಪಿಗಾಗೆ ಹೊರ ತಂದ ಪುಸ್ತಕ ವೊಂದನ್ನು ನಾನು ಖರೀದಿಸಿದೆ. 'ಸ್ವಪ್ನ ಸಾರಸ್ವತ ಮತ್ತು ಈ ವಿಶೇಷಾಂಕ ಎರಡೂ ನನ್ನನ್ನು ಓದಿನತ್ತ ಸೆಳೆಯುತ್ತಾ ಇದೆ.ಇದೆರದ ನಡುವೆ ಶಕು0ತಳ ಕಿಣಿ ಯವರ 'ಬಳ್ಳ0ಬೆಟ್ಟಿನ ಬಾಲ್ಯ ಕಾಲ' ಮತ್ತು ಜೋಗಿಯವರ 'ಗುರುವಾಯನಕೆರೆ' ತಮ್ಮೊಳಗೆ ಪೈಪೋಟಿ ನೀಡಿ ನನ್ನ ಆಕರ್ಷಿಸುತ್ತಿವೆ. ಹಾ. ರಾ ಅವರ ' ವಕೀಲಿ ದಿನಗಳು ' ವೃತ್ತಿ ಸಂಬಂಧಿ ಸ್ವಾರಸ್ಯಕರ ಲೇಖನಕ್ಕೊಸ್ಕರ ನನ್ನ ಕಾಡುತ್ತಿದೆ.ಅನಂತನಾಗ್ ರವರ 'ನನ್ನ ತಮ್ಮ ಶಂಕರ' ಮತ್ತು ಪ್ರೇಮ ಕಾರಂತ್ ಅವರ 'ಸೋಲಿಸಬೇಡ ಗೆಲಿಸಯ್ಯ' ನನ್ನ ಓದಿನ ಬಯಕೆಯನ್ನು ಮತ್ತಸ್ಟು ಹೆಚ್ಚಿಸುವ ಪುಸ್ತಕಗಳು . ಈ ನಡುವೆ ಖರೀದಿಸಿದ ಕಾರ್ನಾಡ್ ಅವರ 'ಟೀಪು ಸುಲ್ತಾನ ಕಂಡ ಕನಸು' , ಟಿಪ್ಪು ಹೆಸರಿನ ವಿಶ್ವವಿದ್ಯಾಲಯ ಸ್ತಾಪನೆ ಬಗ್ಗೆ ನಡೆಯುತ್ತಿರುವ ಚರ್ಚೆಗಳ ಕಾರಣಕ್ಕಾಗಿ ತುರ್ತಾಗಿ ಓದಬೇಕೆಂದೇನಿಸುತ್ತದೆ. ಕುಲದೀಪ್ ನಯ್ಯರ್ ಅವರ ಆತ್ಮ ಕಥನ ಬಾರತದ ಆಧುನಿಕ ಇತಿಹಾಸದ ಬಗೆಗಿನ ಕುತೂಹಲ ತಣಿಸಲು ಯಾವಗ ಓದಿ ಮುಗಿಸುತ್ತೇನೆ ಅನ್ನಿಸ ಪ್ರಾರಂಭಿಸಿದೆ (ಈ ಪುಸ್ತಕ ನನ್ನ ಓದನ್ನು ರಾಮಚಂದ್ರ ಗುಹರವ ಭಾರತಿಯ ಇತಿಹಾಸದ ಪುಸ್ತಕದ ಕಡೆಗೆ ಕೊಂಡೋಯ್ಯುತ್ತದೆ ಅನ್ನುವುದು ನನ್ನ ನಂಬಿಕೆ). ಕಲ್ಕುಳಿ ವಿಟ್ಟಲ್ ಹೆಗ್ಡೆ ಯವರ 'ಮಂಗನ ಬ್ಯಾಟೆ' ಒಂದಷ್ಟು ಓದಿಯಾಗಿದೆ ; ಈ ಮಲೆನಾಡ ಪರಿಸರ ಕಥನ ನನಗೆ ಅತಿಯಾಗಿ ಸೆಳೆದಿದೆ.
ಮೇಲೆ ಹೇಳಿದ ಪುಸ್ತಕವನ್ನು ಯಾವಾಗ ಮುಗಿಸ್ತೇನೊ ನನಗೆ ಗೊತ್ತಿಲ್ಲ. ಈ ಓದದ ಪುಸ್ತಕಗಳ ರಾಶಿಯನಡುವೆ ಖರಿದಿಸಬೇಕೆಂಬ ಪುಸ್ತಕಗಳ ಪಟ್ಟಿಯು ಬೆಳೆಯುತ್ತಾ ಇದೆ.
ನನ್ನ ಕಾರ್ಯದ ಒತ್ತಡ , ಬಿಡುವಿಲ್ಲದ ತಿರುಗಾಟ ಮತ್ತು ಪೂರ್ ಟೈಮ್ ಮ್ಯಾನೇಜ್ಮೆಂಟ್ ನಿಂದಾಗಿ ಪುಸ್ತಕದ ಓದನ್ನು ಅಂದುಕೊಂಡ ಹಾಗೆ ಮುಗಿಸಲಾಗುತಿಲ್ಲ. i have to change...!!!


